Monday, September 18, 2017

ದಾವೂದ್ ಇಬ್ರಾಹಿಂ ಸಹೋದರ ಅರೆಸ್ಟ್

ಭೂಗತ ಪಾತಕಿ, ಡಿ- ಕಂಪೆನಿ ರೂವಾರಿ ದಾವೂದ್‌ ಇಬ್ರಾಹಿಂನ ತಮ್ಮ ಇಕ್ಬಾಲ್‌ ಕಸ್ಕರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಎಇಸಿ ಘಟಕದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಎನ್‌ಕೌಂಟರ್‌ ಖ್ಯಾತಿಯ ಪ್ರದೀಪ್‌ ಶರ್ಮಾ ನೇತೃತ್ವದ ತಂಡವು ಆತನನ್ನು ಬಂಧಿಸಿದೆ.
ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಕ್ಬಾಲ್‌ ಉದ್ಯಮಿಗಳಿಗೆ ದಾವೂದ್‌ ಇಬ್ರಾಹಿಂ ಹೆಸರಿನಲ್ಲಿ ಹಣ ನೀಡುವಂತೆ ಬೆದರಿಸುತ್ತಿದ್ದ. ಈ ಸಂಬಂಧ  ಉಲ್ಲಾಸ್‌ನಗರ, ದೊಂಬಿವಿಲಿಯ ಉದ್ಯಮಿಗಳ ದೂರು ನೀಡಿದ್ದರು. ಇದರ ಆಧಾರದ ಎಎಸಿ ತಂಡವು ಕಸ್ಕರ್‌ನನ್ನು ಬಂಧಿಸಿದೆ.
ಇಕ್ಬಾಲ್‌ನನ್ನು ದಶಕದ ಹಿಂದೆ ಕೊಲ್ಲಿ ದೇಶದಿಂದ ಗಡೀಪಾರು ಮಾಡಲಾಗಿತ್ತು. ಅಮೆರಿಕದಿಂದಲೂ ಈತ ಗಡಿಪಾರು ಆಗಿದ್ದ.

0 comments:

Post a Comment

Copyright © Emediakarnataka | Designed With By Blogger Templates
Scroll To Top