Tuesday, September 26, 2017

ಉರುಳಿಬಿದ್ದ ಮರ: ಶಾಸಕರು ಪಾರು


ಧಾರವಾಡ ಜಿಲ್ಲೆಯ ನವಲಗುಂದ ಶಾಸಕ   ಎನ್ ಎಚ್ ಕೊನರಡ್ಡಿ‌  ಅವರ ಕಾರಿನ ಮೇಲೆ ಮರ ಉರುಳಿಬಿದ್ದಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಅಪಾಯ ಆಗಿಲ್ಲ.

ನವಲಗುಂದ ತಾಲ್ಲೂಕು ಕಚೇರಿ ಎದುರು ಕಾರು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ. ಮಳೆ ಬರುತ್ತಿದ್ದ ವೇಳೆ ಶಾಸಕರು, ಚಾಲಕ ಹಾಗೂ ಆಪ್ತ ಕಾರ್ಯದರ್ಶಿ ಕಾರಿನಲ್ಲಿ ಇದ್ದರು. ಮಳೆ ವೇಳೆ ಗಾಳಿ ಬೀಸಿದ್ದರಿಂದ ಮರ ಉರುಳಿ ಕಾರು ಮೇಲೆ ಬಿದ್ದಿದೆ. ಕೂಡಲೇ ಶಾಸಕರು ಹಾಗೂ ಇತರರು ಕಾರಿನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಹೋದರು.

ತಾಲ್ಲೂಕು ಕಚೇರಿ ಸಿಬ್ಬಂದಿ ಮರ ತೆರವುಗೊಳಿಸಿದರು. 



0 comments:

Post a Comment

Copyright © Emediakarnataka | Designed With By Blogger Templates
Scroll To Top