Sunday, October 8, 2017


ಸಿನಿಮಾ. ಈ ಹೆಸರು ಕೇಳಿದರೆ ಉತ್ತರ ಕರ್ನಾಟಕದ ಬಹುಪಾಲು ಹುಡುಗರು ಆಕರ್ಷಿತರಾಗುತ್ತಾರೆ. ಸಿನಿಮಾ ಗೀಳಿಗೆ ಬಿದ್ದು ಬೆಂಗಳೂರಿಗೆ ಹೋದ ಸಾಕಷ್ಟು ಮಂದಿ, ಸಮಸ್ಯೆಗಳನ್ನು ಎದುರಿಸಿ ವಾಪಸ್‌ ಊರಿಗೆ ಬರುತ್ತಿದ್ದಾರೆ. ಕೆಲವರು ದುಡ್ಡು ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾರೆ.


ಆದರೆ, ನಮ್ಮ ಈ ಉತ್ತರ ಕರ್ನಾಟಕ ಹುಡುಗರು ಮಾತ್ರ ಈ ಅಪವಾದಕ್ಕೆ ವಿರುದ್ಧ. ಯಾರೊಬ್ಬರ ಸಹಾಯವೂ ಇಲ್ಲದೆ, ಸ್ವತಃದ್ದೊಂದು ತಂಡ ಕಟ್ಟಿಕೊಂಡು ಸಾಮಾಜಿಕ ಕಳಕಳಿಯ ವಿಷಯವನ್ನಿಟ್ಟುಕೊಂಡು ಕಿರುಚಿತ್ರ ನಿರ್ಮಿಸುತ್ತಿದ್ದಾರೆ. ಆ ತಂಡವೇ ‘ಮಿಡಿಯಾ ಮೈಂಡ್ ಕ್ರಿಯೆಷನ್ಸ್‌’. 
ಇದರಲ್ಲಿ ಇರುವ ಹುಡುಗರೆಲ್ಲ ಉತ್ತರ ಕರ್ನಾಟಕದವರು. ಹುಡಗಿಯರು ಇಲ್ಲಿಯವರೆ. ಇಂಥ ತಂಡ, ಈ ಹಿಂದೆ ನಿರ್ಮಿಸಿದ್ದ ‘ಪಶ್ಚಾತಾಪ’ ಕಿರುಚಿತ್ರ ಯುಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಹೆಣ್ಣು ಮಕ್ಕಳ ಮಾರಾಟ ಕುರಿತ ಈ ಚಿತ್ರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.


ಈಗ ಇದೇ ತಂಡ ಮತ್ತೊಂದು ಕಿರುಚಿತ್ರ ನಿರ್ಮಿಸಿ, ಅದನ್ನು ತೆರೆಗೆ ತರಲು ಸಜ್ಜಾಗಿದೆ. ಆ ಕಿರುಚಿತ್ರದ ಹೆಸರೇ ‘ರೈತ ಇನ್ನಿಲ್ಲ’
ಹೆಸರೇ ಹೇಳುವಂತೆ ರೈತರ ಆತ್ಮಹತ್ಯೆ ಆಧರಿತ ವಿಷಯವನ್ನಿಟ್ಟುಕೊಂಡು ಈ ಬಾರಿ ‘ರೈತ ಇನ್ನಿಲ್ಲ’ ಕಿರುಚಿತ್ರ ನಿರ್ಮಿಸಲು ಮುಂದಾಗಿದೆ ಈ ತಂಡ.
ಹಳ್ಳಿಗಳಲ್ಲಿ ರೈತರು ಅನುಭವಿಸುವ ಕಷ್ಟ. ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳನ್ನು ಈ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ‘ಮಿಡಿಯಾ ಮೈಂಡ್‌ ಕ್ರಿಯೆಷನ್ಸ್’ ತಂಡದ ಹುಡುಗರು.
ಅಕ್ಟೋಬರ್ 10, 2017 ರಂದು  ಬೆಳಿಗ್ಗೆ 11 ಗಂಟೆಗೆ ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ಕಿರಚಿತ್ರದ ಮೊದಲ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಇದಕ್ಕೆ ಜೆಎಎಸ್‌ ಆಡಳಿತ ಮಂಡಳಿ ಹಾಗೂ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಆಡಳಿತ ಮಂಡಳಿ ಸಹಕಾರ ನೀಡುತ್ತಿದೆ.



ಈಗಾಗಲೇ ಕಿರುಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿರುವ ತಂಡ, ಅದರ ಮೂಲಕ ಸದ್ದು ಮಾಡುತ್ತಿದೆ. ಉತ್ತರ ಕರ್ನಾಟಕದ ಜನ ಈ ಕಿರುಚಿತ್ರ ನೋಡಿ ಪ್ರೋತ್ಸಾಹಿಸಿದರೆ ಸಾಕು ಎನ್ನುತ್ತಾರೆ ತಂಡದ ಸದಸ್ಯರು.

ಈ ಚಿತ್ರತಂಡಕ್ಕೆ ನಮ್ಮ ಆಲ್‌ ದ ಬೆಸ್ಟ್‌. ನೀವು ಪ್ರದರ್ಶನಕ್ಕೆ ಹೋಗಿ ಶುಭಾಷಯ ಕೋರಿ....


–––––––––––––––––––
ಕಿರುಚಿತ್ರದ ಮೊದಲ ಪ್ರದರ್ಶನ
ಅಕ್ಟೋಬರ್ 10, 2017, ಸಮಯ : ಬೆಳಿಗ್ಗೆ 11
ಸ್ಥಳ: ಉತ್ಸವ ಸಭಾಭವನ, ಜೆ.ಎಸ್.ಎಸ್, ವಿದ್ಯಾಗಿರಿ, ಧಾರವಾಡ
ಮೊ. 9448841652


ಫೇಸ್‌ಬುಕ್ ಪೈಜ್ ಲೈಕ್ ಮಾಡಿ: 
https://www.facebook.com/MEDIA-MIND-Creation-223289478112458/notifications/

ಯುಟ್ಯೂಬ್‌ ಚಾನೆಲ್ ಸಬ್‌ಸ್ಕೈಬ್‌ ಮಾಡಿ 
https://www.youtube.com/channel/UC7zfUu9C_SHaozQtm9s1p9Q

ಉತ್ತರ ಕರ್ನಾಟಕ ಹುಡುಗರ ‘ರೈತ ಇನ್ನಿಲ್ಲ’ ತೆರೆಗೆ

Read More

Saturday, October 7, 2017


ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಇಬ್ಬರು ಸೆಲಬ್ರಿಟಿಗಳು ತಮ್ಮ ನಡುವಿನ ಲವ್ ಅಪೈರ್ ಬಗ್ಗೆ ಎಲ್ಲಿಯೂ ಮಾತನಾಡದೇ ತುಟಿ ಬಿಚ್ಚದೇ ಖಾಸಗಿ ಬದುಕಿನ ವಿವರಗಳನ್ನು ಖಾಸಗಿಯಾಗೇ ಇಟ್ಟಿದ್ದಾರೆ. 
ಆದರೆ ಇತ್ತೀಚೆಗೆ ನಟ ಅಮೀರ್ ಖಾನ್ ಜೊತೆಗಿನ ಟಿವಿ ಕಾರ್ಯಕ್ರಮವೊಂದರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ತಮ್ಮ ಮನಸ್ಸಿನಲ್ಲಿದ್ದನ್ನು ಬಹಿರಂಗ ಪಡಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪ್ರಸಾರವಾಗಲಿರುವ ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ ಅಮೀರ್ ಖಾನ್, ಕೊಹ್ಲಿ ಸಂದರ್ಶನ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೀರ್ ಕೊಹ್ಲಿ ಬಳಿ ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಇದಕ್ಕೆ ಕೊಹ್ಲಿ ಉತ್ತರ ಸಹ ನೀಡಿದ್ದಾರೆ. 
Ads by Kiosked
ನಾನು ಆಕೆಯ ಪ್ರಾಮಾಣಿಕತೆ ಮತ್ತು ಕೇರ್ ನೆಸ್ ಅನ್ನು ಪ್ರೀತಿಸುತ್ತೇನೆ, ಆದೆರ ಆಕೆಯಲ್ಲಿ ಇಷ್ಟಪಡದ ಒಂದು ಸಂಗತಿಯಿದೆ ಅದೇನೆಂದರೆ ಅಕೆ ಯಾವಾಗಲೂ 5ರಿಂದ 7 ನಿಮಿಷ ತಡವಾಗಿ ಬರುತ್ತಾಳೆ,  ಆಕೆ ನನ್ನ ಜೊತೆ ಯಾವಾಗಲೂ ಇರುತ್ತಾಳೆ, ನಮ್ಮಿಬ್ಬರ ನಡುವೆ ದೊಡ್ಡ ಅಂಡರ್ ಸ್ಟಾಂಡಿಂಗ್ ಇದೆ, ಕಳೆದ 3-4 ವರ್ಷಗಳಲ್ಲಿ ನನ್ನನ್ನು ಬಹಳಷ್ಟು ಸುಧಾರಿಸಿದ್ದಾಳೆ ಎಂದು ಹೇಳಿದ್ದಾರೆ.

Watch Video:


ಅನುಷ್ಕಾ ಜತೆಗಿನ ಸಂಬಂಧ ಬಿಚ್ಚಿಟ್ಟ ಕೊಹ್ಲಿ

Read More

Thursday, September 28, 2017


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 51ನೆ ಮೇಯರ್ ಆಗಿ ಕಾಂಗ್ರೆಸ್‍ನ ಸಂಪತ್‍ರಾಜ್ ಹಾಗೂ 50ನೆ ಉಪಮೇಯರ್ ಆಗಿ ಜೆಡಿಎಸ್‍ನ ಪದ್ಮಾವತಿ ನರಸಿಂಹಮೂರ್ತಿ ಶುಕ್ರವಾರ (ಸೆ. 28) ಅವರು ಆಯ್ಕೆಯಾದರು.
ಬಿಜೆಪಿ ಸದಸ್ಯರು ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ‘ಎಂಟು ಜನ ನಕಲಿ ಮತದಾರರಿದ್ದು, ನಮಗೆ ನ್ಯಾಯ ಸಿಗುವುದಿಲ್ಲ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದರು. ಬಳಿಕ ಕಾಂಗ್ರೆಸ್‍ನ ಸಂಪತ್‍ರಾಜ್, ಜೆಡಿಎಸ್‍ನ ಪದ್ಮಾವತಿ ಅವರು ಕ್ರಮವಾಗಿ ಮೇಯರ್-ಉಪಮೇಯರ್ ಆಗಿ ಆಯ್ಕೆ ಆಗಿರುವುದನ್ನು ಚುನಾವಣಾಧಿಕಾರಿ ಜಯಂತಿ ಅವರು ಘೋಷಿಸಿದರು.


ಬಿಬಿಎಂಪಿ ಕೌನ್ಸಿಲ್ ಹಾಲ್‍ನಲ್ಲಿ ಚುನಾವಣೆ ನಡೆಯಿತು. 266 ಮತದಾರರನ್ನು ಹೊಂದಿರುವ ಮೇಯರ್-ಉಪಮೇಯರ್ ಚುನಾವಣೆಯಲ್ಲಿ 198 ಪಾಲಿಕೆ ಸದಸ್ಯರು, 28 ಎಂಎಲ್‍ಎ, 25 ಎಂಎಲ್‍ಸಿ, 5 ಲೋಕಸಭಾ ಸದಸ್ಯರು, 10 ರಾಜ್ಯಸಭಾ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದು, ಬಹುಮತಕ್ಕೆ 134 ಮತಗಳ ಅಗತ್ಯವಿತ್ತು. ಕಾಂಗ್ರೆಸ್ ಬಿಬಿಎಂಪಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 109 ಹಾಗೂ ಜೆಡಿಎಸ್ 24, ಪಕ್ಷೇತರರು 7 ಸೇರಿ ಬಹುಮತ ಪಡೆಯುವ ಮೂಲಕ ನಿರೀಕ್ಷೆಯಂತೆ ಮೇಯರ್-ಉಪಮೇಯರ್ ಆಯ್ಕೆ ಆಯಿತು.
ದೇವರಜೀವನಹಳ್ಳಿ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಸಂಪತ್‍ರಾಜ್, ಎರಡನೇ ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಎನ್‍ಎಸ್‍ಯುಐ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿ.ಇ ಮೆಕಾನಿಕಲ್ ಇಂಜಿನಿಯರ್‌ ವ್ಯಾಸಂಗ ಮಾಡಿದ್ದಾರೆ.
 

ಬಿಬಿಎಂಪಿ 51ನೆ ಮೇಯರ್ ಆಗಿ ಕಾಂಗ್ರೆಸ್‍ನ ಸಂಪತ್‍ರಾಜ್

Read More

ಐಟಿ ನಗರಿ ಬೆಂಗಳೂರಿನಲ್ಲಿ ಸದ್ಯ ಎಲ್ಲರೂ 4ಜಿ ನೆಟ್‌ ಬಳಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ‘5ಜಿ’ ನೆಟ್‌ ಬೆಂಗಳೂರಿಗರಿಗೆ ದೊರೆಯಲಿದೆ. ಏರ್‌ಟೆಲ್‌ ಕಂಪೆನಿಯು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ 5ಜಿ ಸೇವೆ ನೀಡಲು ಮುಂದಾಗಿದೆ. ಇದರಿಂದ 4ಜಿ ವೇಗವೂ ಇನ್ನು 5ಜಿಗೆ ಜಿಗಿತವಾಗಲಿದೆ.


ಈ ಸೇವೆಯು ಆರಂಭದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇರಲಿದ್ದು, ನಂತರದ ದಿನಗಳಲ್ಲಿ ಬೇರೆ ನಗರಗಳಿಗೂ ವಿಸ್ತರಿಸಲಿದೆ. ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, 5ಜಿ ನೆಟ್‌ ದೊರೆಯುವ ನೆಟ್‌ವರ್ಕ್‌ಗಳು ಯಾವುವು ಎಂಬುದು ಸದ್ಯದಲ್ಲೇ ತಿಳಿಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ Airtel Company ವೆಬ್‌ಸೈಟ್‌ ನೋಡಬಹುದು.

ಬೆಂಗಳೂರಿಗೆ ಸದ್ಯದಲ್ಲೇ ಬರಲಿದೆ ‘5ಜಿ‘

Read More

Tuesday, September 26, 2017


ಧಾರವಾಡ ಜಿಲ್ಲೆಯ ನವಲಗುಂದ ಶಾಸಕ   ಎನ್ ಎಚ್ ಕೊನರಡ್ಡಿ‌  ಅವರ ಕಾರಿನ ಮೇಲೆ ಮರ ಉರುಳಿಬಿದ್ದಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಅಪಾಯ ಆಗಿಲ್ಲ.

ನವಲಗುಂದ ತಾಲ್ಲೂಕು ಕಚೇರಿ ಎದುರು ಕಾರು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ. ಮಳೆ ಬರುತ್ತಿದ್ದ ವೇಳೆ ಶಾಸಕರು, ಚಾಲಕ ಹಾಗೂ ಆಪ್ತ ಕಾರ್ಯದರ್ಶಿ ಕಾರಿನಲ್ಲಿ ಇದ್ದರು. ಮಳೆ ವೇಳೆ ಗಾಳಿ ಬೀಸಿದ್ದರಿಂದ ಮರ ಉರುಳಿ ಕಾರು ಮೇಲೆ ಬಿದ್ದಿದೆ. ಕೂಡಲೇ ಶಾಸಕರು ಹಾಗೂ ಇತರರು ಕಾರಿನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಹೋದರು.

ತಾಲ್ಲೂಕು ಕಚೇರಿ ಸಿಬ್ಬಂದಿ ಮರ ತೆರವುಗೊಳಿಸಿದರು. 



ಉರುಳಿಬಿದ್ದ ಮರ: ಶಾಸಕರು ಪಾರು

Read More

Sunday, September 24, 2017


ಹೊಸಬರ ಹಾಗೂ ಕನ್ನಡದ ಸಿನಿಮಾಗಳಿಗೆ ಬೆಲೆ ಇಲ್ಲ ಎಂಬುದು ಸಾಬೀತಾಗಿದೆ. ಹೊಸಬರೇ ಸೇರಿ ನಿರ್ಮಿಸಿರುವ ‘ಸಿನಿಮಾ ಫ್ಯಾರ್ ಡೈಸ್’ ಎಂಬ ಚಿತ್ರಕ್ಕೆ ರಾಜ್ಯದಲ್ಲಿ ಯಾವುದೇ ಚಿತ್ರಮಂದಿರ ಸಿಕ್ಕಿಲ್ಲ. ಇದರಿಂದಾಗಿ ಚಿತ್ರತಂಡ, ಚಿತ್ರಮಂದಿರದ ಮಾಲೀಕರಿಗೆ ಸೆಡ್ಡು ಹೊಡೆದು, ಯುಟ್ಯೂಬ್‌ನಲ್ಲಿ ಚಿತ್ರ ಬಿಡುಗಡೆ ಮಾಡಿ ಟಾಂಗ್‌ ಕೊಟ್ಟಿದ್ದಾರೆ. ಜತೆಗೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ರಾಜಕೀಯವನ್ನು ಸಿನಿಮಾದ ಕಥೆಯ ಮೂಲಕ ಬಯಲು ಮಾಡಿ ತೋರಿಸಿದ್ದಾರೆ.

‘ನನ್ ಹೆಸ್ರು ಲಕ್ಷ್ಮಣ್, ಲಕ್ಕಿ ಅಂತಾರ್ ಎಲ್ಲ. ಲಕ್ಕು ಐತೋ ಇಲ್ವೋ ಆ ದೇವರೆ ಬಲ್ಲ. ಸಿನಿಮಾನೆ ಉಸಿರು, ಇಲ್ಲಿ ಬೇಕು ಹೆಸರು’ ಎಂಬ ಸ್ಟೇಟಸ್‌ ಅನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವ ಹುಡುಗ ಲಕ್ಷ್ಮಣ. ಆ ಸ್ಟೇಟಸ್‌ ಆತನ ಅನುಭವದ ಮಾತು ಎಂಬುದು ಆತನನ್ನು ಮಾತನಾಡಿಸಿದ್ದಾಗಲೇ ಗೊತ್ತಾಗುತ್ತದೆ..


50 ನಿಮಿಷಗಳ ಅವಧಿಯ ಈ ಸಿನಿಮಾವನ್ನು ಯಾವುದೇ ಥಿಯೇಟರ್​ನಲ್ಲಿ ರಿಲೀಸ್ ಮಾಡುತ್ತಿಲ್ಲ. ನೇರವಾಗಿ ಯುಟ್ಯೂಬ್​ನಲ್ಲಿ ಹರಿಬಿಡಬೇಕೆಂಬುದು ಸಿನಿ ತಂಡದ ನಿರ್ಧಾರ. ಕಾರಣ, ಚಿತ್ರಮಂದಿರಗಳು ಸಿಗುತ್ತಿಲ್ಲ. ಅಲ್ಲದೆ, ಸಿನಿಮಾದಲ್ಲಿರುವ ವಿಷಯವನ್ನು ಗಾಂಧಿನಗರದ ಮಂದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಉತ್ತಮ ಚಿತ್ರವೊಂದನ್ನು ಕನ್ನಡದ ಸಿನಿಪ್ರಿಯರಿಗೆ ನೀಡಬೇಕೆಂಬ ನಿರ್ದೇಶಕನಿಗೆ, ಸದಭಿರುಚಿ ಸಿನಿಮಾ ಮಾಡಬೇಕೆಂಬ ಆಸೆ ಹೊತ್ತ ನಿರ್ಮಾಪಕನಿಗೆ ಗಾಂಧಿನಗರದ ಕೆಲ ಖ್ಯಾತನಾಮರು ಹೇಗೆಲ್ಲ ವ್ಯಾವಹಾರಿಕವಾಗಿ ವಂಚಿಸುತ್ತಾರೆ, ತುಳಿಯುತ್ತಾರೆ ಎಂಬುದು ಈ ಸಿನಿಮಾ ಕಥೆ.

ಮುಖ್ಯವಾಗಿ ಇಲ್ಲಿ ಸಿನಿಮಾ ವಿತರಣೆ, ಚಿತ್ರಮಂದಿರದ ಮಾಫಿಯಾವನ್ನು ಅನಾವರಣಗೊಳಿಸಲು ಹೊರಟಿದ್ದಾರೆ ನಿರ್ದೇಶಕರು. ಸಿನಿಮಾ ಮೋಹ ಹೊತ್ತ ನಿರ್ದೇಶಕನೊಬ್ಬ ಒಂದು ಸಿನಿಮಾ ಮಾಡಬೇಕೆಂದಾಗ ಎದುರಾಗುವ ಕಷ್ಟ ಇಲ್ಲಿದೆ. ಚಿತ್ರರಂಗದ ‘ಎಬಿಸಿಡಿ..’ ತಿಳಿಯದೆ ಸಿನಿಮಾ ನಿರ್ವಣಕ್ಕಿಳಿಯುವ ನಿರ್ವಪಕನಿಗೆ ಗಾಂಧಿನಗರದ ಪಡಸಾಲೆಯಲ್ಲಿ ಯಾವೆಲ್ಲ ರೀತಿಯ ಮೋಸಗಳಾಗುತ್ತವೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ‘ಸಿನಿಮಾವಾಲ’! ಒಳ್ಳೆಯ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ, ಪರಭಾಷಾ ಸಿನಿಮಾಗಳ ಸ್ಪರ್ಧೆ, ಇದೆಲ್ಲದರ ಮಧ್ಯೆ ಪೈರೆಸಿ ಕಾಟ.. ಇಂತಹ ಸಮಸ್ಯೆಗಳನ್ನೆಲ್ಲ ಎದುರಿಸಿ, ಸಿನಿಮಾ ಗೆಲ್ಲಬೇಕಾದ ಅನಿವಾರ್ಯತೆ ಇದೆ.


ಗಾಂಧಿನಗರದ ವ್ಯವಹಾರ ತಿಳಿಯದ, ಬರೀ ಕ್ರಿಯಾಶೀಲತೆಯನ್ನು ನೆಚ್ಚಿಕೊಂಡ ನಿರ್ದೇಶಕನ ಪಾತ್ರದಲ್ಲಿ ನೈಜ ಅಭಿನಯ ನೀಡಿದ್ದಾರೆ ಲಕ್ಷ್ಮಣ. ರೆಗ್ಯುಲರ್ ಸಿನಿಮಾದಂತೆ ಈ ‘..ಪ್ಯಾರ್​ಡೈಸ್’ ಮೂಡಿಬಂದಿಲ್ಲ. 50 ನಿಮಿಷಗಳಲ್ಲಿ ಒಂದಷ್ಟು ವಾಸ್ತವಾಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಂದಿನ ಸರಣಿಯಲ್ಲಿ ಇನಷ್ಟು ನೈಜ ಅಂಶಗಳನ್ನು ತೆರೆದಿಡುವ ಪ್ರಯತ್ನ ಮಾಡುವ ಉದ್ದೇಶ ಈ ತಂಡಕ್ಕಿದೆಯಂತೆ. ಸದ್ಯಕ್ಕೆ ಈ ಸಿನಿಮಾ ಇಂದು ಯುಟ್ಯೂಬ್​ನಲ್ಲಿ ರಿಲೀಸ್ ಆಗುತ್ತಿದೆ. ‘ದಂಡುಪಾಳ್ಯ’, ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಖ್ಯಾತಿಯ ನಿರ್ಮಾಪಕ ನಾರಾಯಣ ಬಾಬು ಹಾಗೂ ‘ಮಿ. ಡುಪ್ಲಿಕೇಟ್’, ‘ಇದು ಎಂಥಾ ಪ್ರೇಮವಯ್ಯ’ ಖ್ಯಾತಿಯ ನಿರ್ಮಾಪಕ ಕಶ್ಯಪ್ ದಾಕೋಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಸಿನಿಮಾವನ್ನು ಒಮ್ಮೆ ಪೂರ್ಣವಾಗಿ ನೋಡಿ. ನಂತರ ಸಿನಿಮಾ ಕ್ಷೇತ್ರಕ್ಕೆ ಬರಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಿದೆ....

ಸಿನಿಮಾ ನೋಡಲು ಇಲ್ಲಿ ಕ್ಲಿಕ್ ಮಾಡಿ...


ಸಿನಿಮಾ ಜಗತ್ತಿನ ಅಸಲಿ ಮುಖ ಬಯಲು

Read More

Saturday, September 23, 2017



ಪ್ರತಿ ವರ್ಷದಂತೆ ಈ ವರ್ಷವೂ ಉತ್ತರ ಕರ್ನಾಟಕದ ರೈತರ ಹಬ್ಬ ಧಾರವಾಡ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸೆಪ್ಟೆಂಬರ್  22 ರಿಂದ 25ರವರೆಗೆ ನಡೆಯಲಿರುವ ಮೇಳವನ್ನು 'ಜಲ ವೃದ್ದಿ ; ಕೃಣಿ ಅಭಿವೃದ್ಧಿ' ಧ್ಯೇಯವಾಕ್ಯದಡಿ ಆಯೋಜಿಸಲಾಗಿದೆ. 
'ಜಲ ಸಾಕ್ಷರತೆ ಹಾಗೂ ಕೃಷಿ ಕ್ಷೇತ್ರದ ವೈಜ್ಞಾನಿಕ ಹಾಗೂ ತಾಂತ್ರಿಕ ಬದಲಾವಣೆ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಮೇಳದ ಉದ್ದೇಶವಾಗಿದೆ.
ಸೆ. 22ರಂದು ಬೀಜ ಮೇಳಕ್ಕೆ ಚಾಲನೆ ನೀಡಲಾಗಿದ್ದು, ರೈತರು ಬೀಜ ಖರೀದಿಸಿ ಹಿಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಇದುವರೆಗೂ ನೂರಾರು ಟನ್ ಬೀಜ ಮಾರಾಟವಾಗಿದೆ.
ಎರಡನೇ ದಿನವಾದ ಸೆ. 23ರಂದು ಕೃಷಿ ಮೇಳವನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಿದರು. ಗಣಿ ಮತ್ತು  ಭೂ ವಿಜ್ಞಾನ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ   ವಿನಯ ಕುಲಕರ್ಣಿಯವರು ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಸಚಿವರಾದ  ಕೃಷ್ಣ ಬೈರೇಗೌಡರವರು ಮೇಳದ ಅಂಗವಾಗಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ  ಸಚಿವರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಕೃಷಿ ಮೇಳದ ಅಂಗವಾಗಿ ಕೃಷಿ ಸಲಹಾ ಕೇಂದ್ರ, ಮತ್ಸ್ಯ ಮೇಳ, ಬೀಜ ಮೇಳ, ಚಾಂಪಿಯನ್ ರೈತರೊಂದಿಗೆ ಸಂವಾದ, ರೈತರಿಂದ ರೈತರಿಗಾಗಿ, ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಆಧುನಿಕ ಕೃಷಿ ಸಂಶೋದನಾ ತಾಕುಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ನಾಯಿ, ಹಸು, ಎಮ್ಮೆ , ಕುರಿ ತಳಿಗಳ ಪ್ರದರ್ಶನ, ಫಲ ಪುಷ್ಪ ತಾಂಬೂಲ ಪ್ರದರ್ಶನ, ಅಲಂಕಾರಿಕ ಮತ್ಸ್ಯ ಮೇಳ, ರೈತರ ಅನ್ವೇಷಣೆಯ ಪ್ರದರ್ಶನಗಳು, ಸಮಗ್ರ ಕೃಷಿ ಪದ್ಧತಿ, ಜಲಾನಯನ ಅಭಿವೃದ್ಧಿ, ಕೃಷಿ ಹುಟ್ಟುವಳಿಗಳ ಮೌಲ್ಯವರ್ಧನೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಳಿಗೆಗಳು ಕೃಷಿ ಮೇಳದಲ್ಲಿ ಇವೆ.


ಜತೆಗೆ ಬೃಹತ್ ಕೃಷಿ ಉಪಕರಣಗಳ ಪ್ರದರ್ಶನ, ಪುಸ್ತಕ ಪ್ರಕಟಣೆಗಳು, ಉತ್ತಮ ಕೃಷಿ ಪರಿಕರಗಳು ಜೈವಿಕ ಪೀಡೆ ನಾಶಕಗಳು ಮೇಳದಲ್ಲಿ ಇವೆ. ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆ, ರಾಜ್ಯಗಳ ರೈತರು ಮೇಳಕ್ಕೆ ಬರುತ್ತಿದ್ದಾರೆ.

ಸೆ. 25 ಮೇಳದ ಕೊನೆ ದಿನವಾಗಿದ್ದು ತಾವೂ ಸಹ ಮೇಳಕ್ಕೆ ಬಂದು ಒಂದು ಸುತ್ತು ಹಾಕಬಹುದು.


ರೈತರ ಹಬ್ಬ 'ಧಾರವಾಡ ಕೃಷಿ ಮೇಳ'

Read More


ಭಾರತದ ಗಡಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದ ಪಾಕಿಸ್ತಾನದ ಮಾದಕ ವಸ್ತುಗಳ ಜಾಲವನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಪೊಲೀಸರು ಬಯಲು ಮಾಡಿದ್ದಾರೆ.
ಅಮೃತಸರ ಉಪ ವಿಭಾಗದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿ ದಂಧೆಕೋರರನ್ನು ಕೊಂದಿದ್ದಾರೆ.
ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

ಹತರಾದ ಆರೋಪಿಗಳ ಬಳಿ 20 ಸಾವಿರ ಪಾಕಿಸ್ತಾನ್ ಕರೆನ್ಸಿ, ಎಕೆ _47 ಗನ್, 9 ಎಂಎಂ ಪಿಸ್ತೂಲ್, ನೋಕಿಯಾ ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಲಾಗಿದೆ.
ಜತೆಗೆ  ಆ ದಂಧೆಕೋರರ ಬಳಿ, 3 ಕೆ.ಜಿ ಹೆರೊಯಿನ್ ಹಾಗೂ 32 ಗ್ರಾಂ ಅಫಿಮು ಸಿಕ್ಕಿದೆ. ಈ ಕಾರ್ಯಾಚರಣೆಯಲ್ಲಿ ಪಂಜಾಬ್ 32 ನೇ ಬೆಟಾಲಿನ್ ಬಿಎಸ್ಎಫ್ ಪೊಲೀಸರು ಇದ್ದರು.
ಮಾದಕ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ಭಯೋತ್ಪಾದಕ ಸಂಘಟನೆಗೆ ಕೊಡುತ್ತಿದ್ದರು. ಜತೆಗೆ ಭಯೋತ್ಪಾದಕರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂಬುದು ಸದ್ಯಕ್ಕೆ ಪೊಲೀಸರಿಗೆ ಗೊತ್ತಾಗಿದೆ. 

ಪಾಕಿಸ್ತಾನದ ಮಾದಕ ವಸ್ತುಗಳ ಜಾಲ ಬಯಲು

Read More

Monday, September 18, 2017

ಭೂಗತ ಪಾತಕಿ, ಡಿ- ಕಂಪೆನಿ ರೂವಾರಿ ದಾವೂದ್‌ ಇಬ್ರಾಹಿಂನ ತಮ್ಮ ಇಕ್ಬಾಲ್‌ ಕಸ್ಕರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಎಇಸಿ ಘಟಕದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಎನ್‌ಕೌಂಟರ್‌ ಖ್ಯಾತಿಯ ಪ್ರದೀಪ್‌ ಶರ್ಮಾ ನೇತೃತ್ವದ ತಂಡವು ಆತನನ್ನು ಬಂಧಿಸಿದೆ.
ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಕ್ಬಾಲ್‌ ಉದ್ಯಮಿಗಳಿಗೆ ದಾವೂದ್‌ ಇಬ್ರಾಹಿಂ ಹೆಸರಿನಲ್ಲಿ ಹಣ ನೀಡುವಂತೆ ಬೆದರಿಸುತ್ತಿದ್ದ. ಈ ಸಂಬಂಧ  ಉಲ್ಲಾಸ್‌ನಗರ, ದೊಂಬಿವಿಲಿಯ ಉದ್ಯಮಿಗಳ ದೂರು ನೀಡಿದ್ದರು. ಇದರ ಆಧಾರದ ಎಎಸಿ ತಂಡವು ಕಸ್ಕರ್‌ನನ್ನು ಬಂಧಿಸಿದೆ.
ಇಕ್ಬಾಲ್‌ನನ್ನು ದಶಕದ ಹಿಂದೆ ಕೊಲ್ಲಿ ದೇಶದಿಂದ ಗಡೀಪಾರು ಮಾಡಲಾಗಿತ್ತು. ಅಮೆರಿಕದಿಂದಲೂ ಈತ ಗಡಿಪಾರು ಆಗಿದ್ದ.

ದಾವೂದ್ ಇಬ್ರಾಹಿಂ ಸಹೋದರ ಅರೆಸ್ಟ್

Read More

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸಂಸ್ಥೆ ಮೂಲಕ ಹಣ ಪಾವತಿಸಿಕೊಂಡು, ವಾಪಸ್ ನೀಡದೆ ವಂಚಿಸಿದ ಆರೋಪದಡಿ ಸಂಸ್ಥೆಯ ಅಧ್ಯಕ್ಷ ಹಾಗೂ ಸಂಗೊಳ್ಳಿ ರಾಯಣ್ಣ ಸಿನಿಮಾ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಬೆಳಗಾವಿ ಸಿಸಿಬಿ ಪೊಲೀಸರು ಮುಂಬೈನಲ್ಲಿ ಭಾನುವಾರ ಬಂಧಿಸಿದ್ದಾರೆ.
ಇದೇ ತಿಂಗಳ 4ರಂದು ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪ್ಪುಗೋಳ ಸೇರಿ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ದೂರು ನೀಡಿದ್ದರು.
ಠೇವಣಿದಾರರಿಗೆ ನಂಬಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ಆನಂದ್, ಹಣವನ್ನು ಸಕಾಲಕ್ಕೆ ಪಾವತಿಸಿಲ್ಲ. ಬ್ಯಾಂಕ್ ಕಚೇರಿಗೆ, ಶಾಖೆಗಳಿಗೆ ಬೀಗ ಹಾಕಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ತಲೆ ಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮುಂಬೈನ ಆಪ್ತರ ಅಪಾರ್ಟ್‌ಮೆಂಟ್‌ನಲ್ಲಿದ್ದ ಅಪ್ಪುಗೋಳ ಅವರನ್ನು ಬಂಧಿಸಿ ಕರೆತಂದಿದ್ದಾರೆ.
3ನೇ ಜೆಎಂಎಫ್‌ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದೆ.. 4 ದಿನಗಳವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 
ಅವರು ಎಷ್ಟು ಜನರಿಗೆ ಹಾಗೂ ಎಷ್ಟು ಮೊತ್ತದ ಹಣವನ್ನು ವಾಪಸ್ ಪಾವತಿಸಬೇಕಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣ ಸಿನಿಮಾ ನಿರ್ಮಾಪಕ ಅರೆಸ್ಟ್

Read More

Sunday, September 17, 2017


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಗೂ ಅವರ ಕುಟುಂಬದ ಸದಸ್ಯರ, ನಾಲ್ವರು ಸಚಿವರು, ಮೂವರು ಶಾಸಕರು ಹಾಗೂ ಇಬ್ಬರು ಅಧಿಕಾರಿಗಳು ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅವುಗಳ ದಾಖಲೆಯನ್ನು ವಾರದೊಳಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರ್ಗಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸರ್ಕಾರವು ಜನರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರದ  ಹರಿಹಾಯ್ದರು.
ಭ್ರಷ್ಟಾಚಾರದ ಕೆಲ ದಾಖಲಗಳು  ಸಿಗಬೇಕಿದೆ. ಅದು ಅವುಗಳು ಸಿಕ್ಕ ಬಳಿಕ ಎಲ್ಲರ ಜಾತಕ ಜಾಲಾಡುತ್ತೇನೆ ಎಂದರು.
ಉತ್ತರ ಕರ್ನಾಟಕದ ವಿಜಯಪುರ ಅಥವಾ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹೈಕಮಾಂಡ್ ಕೂಡ ಅದನ್ನೇ ಹೇಳಿದೆ‌. ಹೀಗಾಗಿ ಈ ಬಾರಿ ವಿಜಯಪುರ ಅಥವಾ ಬಾಗಲಕೋಟೆಯಿಂದ ಸ್ಪರ್ಧಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ ಜಾರಕಿಹೊಳಿ ಹಾಗೂ ಯಾರಾದರೂ ಚುನಾವಣೆಗೆ ನಿಲ್ಲಲಿ. ನಮ್ಮ ಸಾಮರ್ಥ್ಯ ತೋರಿಸುತ್ತೇವೆ.
ಸರ್ಕಾರದ ನೀರಾವರಿ ಯೋಜನೆಗಳ ವೈಫಲ್ಯ ಖಂಡಿಸಿ ಸೆ. 20ರಂದು ಕೊಪ್ಪಳ, 23ರಂದು ವಿಜಯಪುರದಲ್ಲಿ ಹೋರಾಟ, 22ರಂದು ಬೀಳಗಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮಾವೇಶ ನಡೆಸಲಿದ್ದೇವೆ ಎಂದರು.

ನಮ್ಮ ನಡಿಗೆಗೆ ಮೋದಿ ಅವರಿಂದ ಚಾಲನೆ;
ಅ. 1ರಂದು ಬೆಂಗಳೂರಿನಲ್ಲಿ ನವ ಕರ್ನಾಟಕ ನಿರ್ಮಾಣಕ್ಕೆ ವಿಧಾನಸಭಾ ಕ್ಷೇತ್ರದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವರು ಎಂದು ಯಡಿಯೂರಪ್ಪ ತಿಳಿಸಿದರು.
ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊಲೆ, ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ಜರುಗುತ್ತಿವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. Dysp ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಮುಖ್ಯಮಂತ್ರಿ ಅವರು ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆಯಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ಭ್ರಷ್ಟಾಚಾರದ ದಾಖಲೆ ಬಿಡುಗಡೆ: ಬಿಎಸ್ ವೈ

Read More


ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಶಶಿಕಲಾ ಅವರಿಗೆ ಸಿಗುತ್ತಿದ್ದ ಐಶಾರಾಮಿ ಸವಲತ್ತುಗಳನ್ನು ಬಯಲು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಈ ವರ್ಷದ ರಾಷ್ಟ್ರಪತಿ ಪದಕ ಲಭಿಸಿದೆ.
ರಾಜ್ಯ ಕಾರಾಗೃಹಗಳ ಡಿಐಜಿ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪತ್ತೆ ಹಚ್ಚಿದ್ದರು. ಸ್ವತಃ ಕಾರಾಗೃಹಗಳ ಇಲಾಖೆಯ ಡಿಜಿಪಿ ಸತ್ಯನಾರಾಯಣರಾವ್ ಅವರ ಮೇಲೆಯೇ ಲಂಚದ ಆರೋಪ ಮಾಡಿದ್ದರು.
ಇಲಾಖೆಯಲ್ಲಿ ಡಿಐಜಿ ಹಾಗೂ ಡಿಜಿಪಿ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗಿತ್ತು. ಇದಕ್ಕೆ ತೀಲಾಂಜಲಿ ಹಾಡಲು ರೂಪಾ ಅವರನ್ನು ಕಾರಾಗೃಹಗಳ ಇಲಾಖೆಯಿಂದ ವರ್ಗ ಮಾಡಲಾಗಿತ್ತು.
ಸದ್ಯ ಅವರು ರಾಜ್ಯ ರಸ್ತೆ ಸುರಕ್ಷತಾ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ‌.
ಅವರ ದಿಟ್ಟ, ಪ್ರಾಮಾಣಿಕ ಸೇವೆಯನ್ನು ಮೆಚ್ಚಿ, ಅವರ ಸೇವಾ ಸಾಧನೆಗೆ ರಾಷ್ಟ್ರಪತಿ ಪದಕ ನೀಡಲಾಗಿದೆ.  ಇತ್ತೀಚೆಗೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಪದಕ ಪ್ರದಾನ ಮಾಡಿದರು‌. ಅವರೊಂದಿಗೆ ಹಲವು ಐಪಿಎಸ್ ಅಧಿಕಾರಿಗಳಿಗೆ ಪದಕ ಪ್ರದಾನ ಮಾಡಲಾಯಿತು.

ದಿಟ್ಟ ಪೊಲೀಸ್ ಅಧಿಕಾರಿ ರೂಪಾಗೆ ರಾಷ್ಟ್ರಪತಿ ಪದಕ

Read More

Saturday, September 16, 2017


ಬೆಂಗಳೂರು ಕಾರ್ಲಟನ್ ಕಟ್ಟಡದಲ್ಲಿರುವ ಸಿಐಡಿ ಕಚೇರಿಯ ಕ್ಯಾಂಟೀನ್ ಬಳಿಯ ಶೌಚಾಲಯ ಹಲವು ತಿಂಗಳಿನಿಂದ ಗಬ್ಬು ನಾರುತ್ತಿದೆ.
ಸಿಐಡಿ ಅಧಿಕಾರಿಗಳ ಕಾರು ಚಾಲಕರು ಹೆಚ್ಚಾಗಿ ಈ ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಆದರೆ, ಈಗ ಅವರೆಲ್ಲ ಶೌಚಾಲಯ ಹೊಲಸಾಗಿದ್ದು, ಇದರಿಂದ ಕಷ್ಟ ಅನುಭವಿಸುತ್ತಿದ್ದಾರೆ. 
ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್ ಬಳಿಯೇ ಈ ಶೌಚಾಲಯ ಇದೆ. ಜತೆಗೆ ಇದರ ಬಳಿಯೆ ದೇವಸ್ಥಾನವು ಇದೆ. ಇನ್ನು ಇದೇ ಶೌಚಾಲಯಕ್ಕೆ ಹೊಂದಿಕೊಂಡೆ ಕಾರು ತೊಳೆಯುವ ಜಾಗವಿದ್ದು, ನಿತ್ಯವೂ ನೂರಾರು ವಾಹನಗಳನ್ನು  ಇಲ್ಲಿಯೆ ಸ್ವಚ್ಛ ಮಾಡಲಾಗುತ್ತದೆ. ಆದರೆ, ಆ ಜಾಗದಲ್ಲೆಲ್ಲ ಶೌಚಾಲಯ ವಾಸನೆ ಬರುತ್ತಿದೆ. 


ಸಮರ್ಪಕವಾಗಿ ನೀರು ಪೂರೈಕೆ ಆಗದಿದ್ದರಿಂದಲೇ ಈ ದುಸ್ಥಿತಿ ಬಂದಿದೆ ಎಂದು ಕಚೇರಿಯ ಸಿಬ್ಬಂದಿ ಹೇಳುತ್ತಾರೆ. ರಾಜ್ಯದ ಕಳ್ಳಕಾಕರ ನಿದ್ದೆಗೆಡಿಸುವ ಸಿಐಡಿ ಕಚೇರಿ ಬಳಿಯೇ ಸಿಬ್ಬಂದಿ ಶೌಚಾಲಯಕ್ಕೆ ಅಂಜುವ ಸ್ಥಿತಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಶೌಚಾಲಯ ಸ್ವಚ್ಛಗೊಳಿಸಬೇಕಾಗಿದೆ.

ಸಿಐಡಿ ಕಚೇರಿ ಶೌಚಾಲಯ ದುಸ್ಥಿತಿ

Read More


ಅರವತ್ತರ ದಶಕದಲ್ಲಿ ತೆರೆಕಂಡ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನೋಡದವರು ವಿರಳ. ಪ್ರಾಮಾಣಿಕರನ್ನು ನಿಂದಿಸುವಾಗಲೂ ನೀನು ಸತ್ಯ ಹರಿಶ್ಚಂದ್ರನೇ ಎಂದು ಮೂದಲಿಸುವವರಿಗೆ ಕೊರತೆಯಿಲ್ಲ. ಗಾಂಧಿನಗರದಲ್ಲಿ ಈಗ ಸತ್ಯದ ಹುಡುಕಾಟ ನಡೆದಿದೆ. ಕಾಮಿಡಿ ಕಿಂಗ್‌ ಶರಣ್‌ ಸತ್ಯ ಹರಿಶ್ಚಂದ್ರನ ಅವತಾರ ತಳೆದಿದ್ದಾರೆ.
ವರನಟ ಡಾ.ರಾಜ್‌ಕುಮಾರ್‌ ಅಭಿನಯದ ಸತ್ಯ ಹರಿಶ್ಚಂದ್ರ ಸಿನಿಮಾಕ್ಕೂ ಮತ್ತು ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದ ಟೈಟಲ್‌ ಅನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಪಂಜಾಬಿ ಚಿತ್ರದ ಎಳೆಯೊಂದರನ್ನು ಆಧರಿಸಿ ಈ ಚಿತ್ರ ಸಿದ್ಧಗೊಂಡಿದೆ. ಈಚೆಗೆ ಚಿತ್ರತಂಡವು ಚಿತ್ರದ ಆಡಿಯೋ ಬಿಡುಗಡೆ ಮಾಡಿತು.
ನಿರ್ಮಾಪಕ ಕೆ. ಮಂಜು, ‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಪೋರ್ಚುಗಲ್‌ನಲ್ಲಿ ಫೈಟ್, ಹಾಡಗಳನ್ನು ಚಿತ್ರೀಕರಿಸಲಾಗಿದೆ. ಇದಕ್ಕೆ ಹೆಚ್ಚು ಖರ್ಚಾಯಿತು. ಆದರೆ, ಪರದೆ ಮೇಲೆ ಚಿತ್ರ ನೋಡಿದಾಗ ಎಲ್ಲವೂ ಮರೆತು ಹೋಗುತ್ತದೆ. ಸೆನ್ಸಾರ್‌ ಮಂಡಳಿಯು ಯು/ಎ ಅರ್ಹತಾ ಪತ್ರ ನೀಡಿದೆ ಎಂದ ಅವರು, ಇನ್ನು ಮುಂದೆ ವರ್ಷಕ್ಕೆ ಎರಡರಿಂದ ಮೂರು ಚಿತ್ರ ಮಾಡುವ ಭರವಸೆ ನೀಡಿದರು.
‘ಕುಲದಲ್ಲಿ ಮೇಲಾವುದೋ... ಹಾಡನ್ನು ಅಧಿಕೃತವಾಗಿ ಅನುಮತಿ ಪಡೆದುಕೊಂಡು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಬೆಳವಣಿಗೆ ಎಲ್ಲರಲ್ಲೂ ಬರಬೇಕು’ ಎಂದ ಲಹರಿ ವೇಲು ಅವರು, ಗಾಂಧಿನಗರದಲ್ಲಿ ಸತ್ಯ ಇಲ್ಲ ಸರ್ಟಿಫಿಕೇಟ್‌ ನೀಡಿದರು.
ನಾಯಕಿ ಸಂಚಿತಾ ಪಡುಕೋಣೆ, ‘ಇತರೇ ಭಾಷೆಯಲ್ಲಿ ನಟಿಸುವಾಗ ಕನ್ನಡದಲ್ಲಿ ಯಾಕೆ ಅಭಿನಯಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಈ ಸಿನಿಮಾವೂ ಇದಕ್ಕೆ ಉತ್ತರ ನೀಡಿದೆ’ ಎಂದಷ್ಟೇ ಹೇಳಿದರು.
‘ಮೂಲ ಚಿತ್ರಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಚಿತ್ರ ಮಾಡಲಾಗಿದೆ. ಆ ಚಿತ್ರದಲ್ಲಿ ಸತ್ಯ ಹರಿಶ್ಚಂದ್ರ ಎಷ್ಟೇ ಕಷ್ಟ ಎದುರಾದರೂ ಸತ್ಯ ಹೇಳುತ್ತಿರುತ್ತಾನೆ. ನಾನು ಬಾಯಿಬಿಟ್ಟರೆ ಸುಳ್ಳು ಹೇಳುತ್ತೇನೆ. ಆದರೆ, ಅಂತಿಮವಾಗಿ ಸತ್ಯವೇ ಜಯಿಸುತ್ತದೆ’ ಎಂದು ಪಾತ್ರದ ಗುಟ್ಟು ಬಿಟ್ಟುಕೊಟ್ಟರು ಶರಣ್‌.
‘ನಾನು ನಾಯಕನ ಸ್ಥಾನಕ್ಕೇರಲು ಅರ್ಜುನ್‌ ಜನ್ಯ ಕಾರಣ. ರ‍್ಯಾಂಬೋ ಚಿತ್ರದ ಹಾಡುಗಳನ್ನು ಗಣೇಶ್ ಬಿಡುಗಡೆ ಮಾಡಿದ್ದರು. ಹಾಡುಗಳು ಹಿಟ್ ಆಗಿದ್ದವು. ಶರತ್‌ ಲೋಹಿತಾಶ್ವ ಅವರ ಕಂಠ, ಅಭಿನಯ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಕಾಮಿಡಿ ಸೃಷ್ಟಿ ಮಾಡುವುದು ಕಷ್ಟ. ಆದರೆ, ನಿರ್ದೇಶಕರು ಹಾಸ್ಯದೃಶ್ಯವನ್ನು ಚೆನ್ನಾಗಿ ನಿರೂಪಿಸಿದ್ದಾರೆ’ ಎಂದರು ಶರಣ್.
‘ಯಾವುದೇ ಚಿತ್ರ ಮಾಡಿದರೂ ಘನತೆ ಇರುತ್ತದೆ. ದಯಾಳ್ ಪದ್ಮನಾಭನ್‌ ಉತ್ತಮ ತಂತ್ರಜ್ಞರು. ಅವರು ಕಥೆ ಹೇಳುವ ರೀತಿಯಲ್ಲಿ ಭಿನ್ನವಾಗಿರುತ್ತದೆ. ರ‍್ಯಾಂಬೋದಲ್ಲಿ ಒಂದು ನಿಮಿಷದ ಸನ್ನಿವೇಶಕ್ಕೆ ಹಿನ್ನೆಲೆ ಧ್ವನಿ ನೀಡಲು ಹೋದೆ. ಕೊನೆಗೆ, ಇಡೀ ಚಿತ್ರಕ್ಕೆ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು’ ಎಂದು ನೆನಪಿಗೆ ಜಾರಿದರು ನಟ ಗಣೇಶ್.
‘ಬದುಕಿನಲ್ಲಿ ಸರಳತೆ ಉಳಿಸಿಕೊಂಡಿದ್ದು, ಗೊಂದಲಗಳು ತಲೆದೋರಿದಾಗ ನಾಯಕ ಅದನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರ’ ಎಂದರು ನಾಯಕಿ ಭಾವನಾರಾವ್.

ಶರಣ್, ‘ಸತ್ಯ ಹರಿಶ್ಚಂದ್ರ’ನ ಅವತಾರದಲ್ಲಿ

Read More

ಬೆಂಗಳೂರು: ಕಿಚ್ಚ ಸುದೀಪ್‌ ವಿಲನ್‌ ನಂತರ ಪೈಲ್ವಾನ್‌ ಚಿತ್ರದಲ್ಲಿ ಬಾಕ್ಸರ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಯಾಗಿದೆ.
ಎಸ್‌.ಕೃಷ್ಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪೈಲ್ವಾನ್‌ ‘ಬಾಕ್ಸಿಂಗ್‌ ಮತ್ತು ಕುಸ್ತಿ’ ಕುರಿತಾದ ಚಿತ್ರವಾಗಿದೆ.
ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ ಶನಿವಾರ ನಿರ್ದೇಶಕ ಎಸ್‌.ಕೃಷ್ಣ ಪೈಲ್ವಾನ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.
ಪೈಲ್ವಾನ್‌ ಚಿತ್ರವನ್ನು ಆರ್‌.ಆರ್‌.ಆರ್‌. ಮೋಷನ್‌ ಪಿಕ್ಚರ್‌ ಬ್ಯಾನರ್‌ ಅಡಿಯಲ್ಲಿ ಸ್ವಪ್ನಾ ಕೃಷ್ಣ ಮತ್ತು ಕೃಷ್ಣ ನಿರ್ಮಿಸುತ್ತಿದ್ದು, ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.
ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನವಿದ್ದು, ಕರುಣಾಕರ.ಎ ಛಾಯಾಗ್ರಹಣ ಮಾಡಲಿದ್ದಾರೆ.

ಪೈಲ್ವಾನ್‌ ಚಿತ್ರದ ಪೋಸ್ಟರ್‌ ಬಿಡುಗಡೆ

Read More


1989ರಲ್ಲಿ ಜನರ ಮನಸೂರೆಗೊಂಡಿದ್ದ, ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಿತ್ರ ‘ನಂಜುಂಡಿ ಕಲ್ಯಾಣ’. ಈಗ ಇದೇ ಹೆಸರಿನ ಇನ್ನೊಂದು ಚಿತ್ರ ತೆರೆಯ ಮೇಲೆ ಬರಲಿದೆ. ಈಗಿನ ‘ನಂಜುಂಡಿ ಕಲ್ಯಾಣ’ವನ್ನು ತೆರೆಗೆ ತರುತ್ತಿರುವವರು ನಿರ್ದೇಶಕ ರಾಜೇಂದ್ರ ಕಾರಂತ ಅವರು. ಈ ಚಿತ್ರದ ನಾಯಕ ಮತ್ತು ನಾಯಕಿಯಾಗಿ ಬಣ್ಣ ಹಚ್ಚಿರುವವರು ತನುಷ್ ಮತ್ತು ಶ್ರಾವ್ಯಾ. ಶಿವಣ್ಣ ದಾಸನಪುರ ಇದರ ನಿರ್ಮಾಪಕರು.
ಹೊಸ ‘ನಂಜುಂಡಿ ಕಲ್ಯಾಣ’ದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಮಾತು ಆರಂಭಿಸಿದ ನಿರ್ದೇಶಕ ಕಾರಂತ ಅವರು, ‘ರಾಘವೇಂದ್ರ ರಾಜ್‌ಕುಮಾರ್‌ ಅಭಿನಯಿಸಿದ್ದ ಸಿನಿಮಾ ಐಕಾನಿಕ್‌ ಆಗಿತ್ತು. ಈಗ ನಾವು ಮಾಡುತ್ತಿರುವುದು ಅಷ್ಟೇನೂ ದೊಡ್ಡದಲ್ಲದ ಸಿನಿಮಾ’ ಎಂಬ ಸ್ಪಷ್ಟನೆ ನೀಡಿದರು. ಅಂದಹಾಗೆ, ಈ ಚಿತ್ರಕ್ಕೆ ಈ ಹೆಸರು ಇಡಲು ರಾಘವೇಂದ್ರ ರಾಜ್‌ಕುಮಾರ್‌ ಅವರು ಒಪ್ಪಿಗೆ ಸೂಚಿಸಿದ್ದಾರಂತೆ.
‘ಹಟಮಾರಿ ತಾಯಿಯನ್ನು ಒಲಿಸಿ, ತಾನು ಇಷ್ಟಪಟ್ಟ ಹುಡುಗಿಯನ್ನು ನಂಜುಂಡಿ ಹೇಗೆ ಮದುವೆ ಆಗುತ್ತಾನೆ ಎಂಬುದೇ ಈ ಸಿನಿಮಾದ ವಸ್ತು’ ಎಂದರು ಕಾರಂತ. ತಾಯಿಯ ಪಾತ್ರದ ಹೊಣೆ ಪದ್ಮಜಾ ರಾವ್ ಅವರ ಹೆಗಲೇರಿದೆ. ನಂಜುಂಡಿಗೆ ಇಷ್ಟವಾಗುವ ಹುಡುಗಿಯ ಪಾತ್ರವನ್ನು ಶ್ರಾವ್ಯಾ ಅಭಿನಯಿಸುತ್ತಿದ್ದಾರೆ.
‘ಶ್ರಾವ್ಯಾ ಅವರು ನಟನೆ ಮಾಡುವುದಿಲ್ಲ. ಅವರು ಭಾವನೆಗಳನ್ನು ಜೀವಿಸುತ್ತಾರೆ’ ಎಂಬ ಮೆಚ್ಚುಗೆಯ ಮಾತುಗಳು ಕಾರಂತ ಅವರಿಂದ ಬಂದಿವೆ. ಈ ಚಿತ್ರದಲ್ಲಿ ದ್ವಂದ್ವಾರ್ಥ ನೀಡುವ ಸಂಭಾಷಣೆಗಳೂ ಅಷ್ಟಿಷ್ಟು ಇವೆ. ಈ ಬಗ್ಗೆ ವಿವರಣೆ ನೀಡಿದ ಕಾರಂತ, ‘ಅಶ್ಲೀಲತೆಯ ಗೆರೆ ದಾಟದಂತೆ, ತುಂಟತನದಿಂದ ಸಿನಿಮಾ ಮಾಡಿದ್ದೇವೆ’ ಎಂದರು.
ಕಾರ್ಯಕ್ರಮದ ಆರಂಭದಲ್ಲೇ ಮಾತನಾಡಿದ ನಟ ತನುಷ್, ‘ಒಂದು ವರ್ಷದ ಹಿಂದೆ ಮಡಮಕ್ಕಿ ಎಂಬ ಸಿನಿಮಾ ಮಾಡಿದ್ದೆವು. ಗಂಭೀರ ವಿಷಯವೊಂದನ್ನು ಅದು ಕಥಾವಸ್ತುವನ್ನಾಗಿ ಹೊಂದಿತ್ತು. ಆದರೆ, ಅದಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ. ಹಾಗಾಗಿ, ಈ ಬಾರಿ ಹಾಸ್ಯ ವಸ್ತುವೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎಂದರು.
‘ಮಡಮಕ್ಕಿ’ ಸಿನಿಮಾಕ್ಕೆ ₹ 4 ಕೋಟಿ ಖರ್ಚು ಮಾಡಿದ್ದರಂತೆ. ಆದರೆ, ಅದರಲ್ಲಿನ ಶೇಕಡ 10ರಷ್ಟು ಹಣ ಕೂಡ ಹಿಂದಕ್ಕೆ ಬರಲಿಲ್ಲ ಎಂದರು ತನುಷ್. ಹಿರಿಯ ಕಲಾವಿದ ಮಂಜುನಾಥ ಹೆಗಡೆ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ನಗುವುದಕ್ಕೆ ಒಂದು ಔಷಧ ಸೇವಿಸಿ ಸಿನಿಮಾ ಮಂದಿರಕ್ಕೆ ಬಂದಂತೆ ಇರುತ್ತದೆ ಈ ಚಿತ್ರ ವೀಕ್ಷಿಸುವಾಗಿನ ಅನುಭವ’ ಎಂದರು ಹೆಗಡೆ.
ನಿರ್ದೇಶಕ ಕಾರಂತ ಅವರಿಂದ ಹೊಗಳಿಕೆಯ ಮಾತು ಕೇಳಿಸಿಕೊಂಡ ಶ್ರಾವ್ಯಾ ಖುಷಿಯಾಗಿದ್ದರು. ತಮ್ಮ ಮಾತಿನ ಸರದಿ ಬಂದಾಗ ಶ್ರಾವ್ಯಾ, ‘ನಿರ್ದೇಶಕರಿಂದ ಒಳ್ಳೆಯ ಮಾತು ಹೇಳಿಸಿಕೊಳ್ಳುವುದು ನನ್ನ ಗುರಿಯಾಗಿತ್ತು. ಅದು ಇಂದು ಈಡೇರಿದೆ’ ಎಂದರು. ಶ್ರಾವ್ಯಾ ಅವರದ್ದು ಮಧ್ಯಮ ವರ್ಗದ ಹುಡುಗಿಯ ಪಾತ್ರವಂತೆ ಈ ಸಿನಿಮಾದಲ್ಲಿ.
- (ಪ್ರಜಾವಾಣಿ)

ಹೊಸ ಅವತಾರದಲ್ಲಿ ‘ನಂಜುಂಡಿ ಕಲ್ಯಾಣ’!

Read More


ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯ ಯಾವುದಾದರೂ ಮತ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿ, ಆರು ಬಾರಿ ಗೆದ್ದಿದ್ದ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಕ್ಷೇತ್ರ ಬದಲಿಸಲಿದ್ದಾರೆ ಎಂದು ಮೂಲಗಳು  ಖಚಿತಪಡಿಸಿವೆ.
ಶನಿವಾರ ಸಂಜೆ ಪ್ರಮುಖರ ಸಮಿತಿ ಸಭೆ ನಡೆಯುತ್ತಿದ್ದಾಗಲೇ ದೆಹಲಿಯಿಂದ ಕರೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಇಂಥದೊಂದು ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.
ಶಿಕಾರಿಪುರದ ಮೇಲೆ ನಿಮಗೆ ಪ್ರೀತಿ ಇರುವುದ ನಿಜ. ಪಕ್ಷದ ಹಿತದೃಷ್ಟಿಯಿಂದ ನೀವು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಅಲ್ಲಿ ಹೆಚ್ಚಿನ ಬಲ ಬರಲಿದೆಎಂದು ಷಾ ಸಲಹೆ ನೀಡಿರುವುದಾಗಿ ಮೂಲಗಳು ಹೇಳಿವೆ.
ಸಭೆಯಲ್ಲಿದ್ದ ಪ್ರಕಾಶ್ ಜಾವಡೇಕರ್, ಪೀಯೂಷ್ ಗೋಯಲ್ ಸಲಹೆ ಬಳಿಕ ಯಡಿಯೂರಪ್ಪ ಇದಕ್ಕೆ ಸಮ್ಮತಿಸಿದ್ದಾರೆ.

ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಸ್ಪರ್ಧೆ

Read More

Thursday, September 14, 2017

ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ವಾಯುಪಡೆಯ ಹಿರಿಯ ಮಾರ್ಷಲ್‌ ಅರ್ಜನ್‌ ಸಿಂಗ್‌(98) ಶನಿವಾರ ನಿಧನರಾದರು.
ಭಾರತೀಯ ವಾಯುಪಡೆಯ ಮೊದಲ ಫೈವ್‌–ಸ್ಟಾರ್‌ ದರ್ಜೆ ಅಧಿಕಾರಿ ಅರ್ಜನ್‌ ಸಿಂಗ್‌ ಅವರನ್ನು ಶನಿವಾರ ಬೆಳಿಗ್ಗೆ ಸೇನಾ ಸಂಶೋಧನಾ ಹಾಗೂ ರೆಫೆರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡ ಅರ್ಜನ್‌ ಸಿಂಗ್‌ ಅವರನ್ನು ಭಾರತೀಯ ವಾಯುಪಡೆಯ ಮೊದಲ ಮಾರ್ಷಲ್‌ ಎಂದೇ ಖ್ಯಾತರಾದವರು.

1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿಗೆ ಅರ್ಜನ್‌ ಸಿಂಗ್‌ ಮಹತ್ವದ ಪಾತ್ರವಹಿಸಿದ್ದರು. 1964ರ ಆಗಸ್ಟ್‌ನಿಂದ 1969ರ ವರೆಗೂ ವಾಯುಪಡೆಯ ನೇತೃತ್ವ ವಹಿಸಿದ್ದರು. ಇವರು ಏರ್‌ ಚೀಫ್‌ ಮಾರ್ಷಲ್‌ ಸ್ಥಾನ(1966ರ ಜನವರಿ 16) ಪಡೆದ ಮೊದಲ ಭಾರತೀಯ ವಾಯುಪಡೆಯ ಮುಖ್ಯಸ್ಥ.
ಪ್ರಧಾನಿ ಮೋದಿ ಅರ್ಜನ್‌ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ವಾಯುಪಡೆಯ ’ಮಾರ್ಷಲ್‌’ ಅರ್ಜನ್‌ ಸಿಂಗ್‌ ನಿಧನ

Read More

Copyright © Emediakarnataka | Designed With By Blogger Templates
Scroll To Top